ಭಾವ ಕಿರಣ
ಬಂದ ಭಾವಕ್ಕೆ ಬಂಧನವಿಲ್ಲ,.. ಬಿಡುಗಡೆ !!
Wednesday, July 14, 2010
ಹೊಸ ಹಾಡು
ಇಂದೇ ಕಂಡೆ ಕನ್ನಡಿಯಲಿ ನಾಳಿನಾ ಮುಖ
ಎಂದೂ ತೊರೆದು ಹೋಗದಂತ ತೀರದಾ ದುಃಖ
ಕೃಷ್ಣನೊಲುಮೆ ಕಾದಂತೆ ಚೆಲುವೆ ರಾಧಿಕ
ನಾನೂ ಕಾಯುತಿರುವೆ ನಲಿವಿನಮೃಥದಾ ಸುಖ !!
Monday, July 12, 2010
ನೀನು ದೂರಾದಾಗ ನಾನೇನು ಅಳುತಿಲ್ಲ !!
ನೀನು ದೂರಾದಾಗ ನಾನೇನು ಅಳುತಿಲ್ಲ
ಹೆಪ್ಪುಗಟ್ಟಿದೆಯಿಲ್ಲಿ ಕಣ್ಣ ನೀರು
ಮತ್ತೆ ಜಾರಿದೆ ಧರೆಗೆ ನಳನಳಿಸುತಿಹ ಮರವು
ಕಡಿದೆಯಲ್ಲೇ ಅದರ ತಾಯಿಬೇರು
ಅಂದು ನೀ ಬಂದಾಗ ಬಂಧಗಳ ಬೆಸೆದಾಗ
ನನ್ನ ನೋವಿನ ಗಿಡಕೆ ಪ್ರೀತಿ ಹೂವು
ಎಲ್ಲೋ ಮರುಗಿದ ದನಿಯು ನಿನ್ನ ಸಾಮೀಪ್ಯದಲಿ
ಗಾನವಾಯಿತು ಮರೆತು ಎಲ್ಲ ನೋವು
ಸಾಯಲಾರದೆ ನೆನಪು ; ಮತ್ತೆ ಮರುಕಳಿಸುವುದು
ಕಾಡುವುದು ಎಲ್ಲ ಕಡೆ ನಿನ್ನ ನೆನೆದು
ಮರೆಯಲಾರದೆ ನಿನ್ನ ಸೇರಲಾರದೆ ನಿನ್ನ
ಹೇಳಲಾರೆನು ಮನಕೆ ; ಮಾತೆ ಬರದು
ನೀ ಕೊಟ್ಟ ಸ್ನೇಹವನು ಇಟ್ಟಿರುವೆ ಎದೆಯೊಳಗೆ
ಕಾಯುತಿಹೆ ನಾನದನು ಹಿಂದೆ ಕೊಡಲು
ನೀನದನು ಪಡೆದುಕೋ ಮತ್ತೆ ಹೋದರು ಸರಿಯೇ
ಸ್ವೀಕರಿಸಲೇಬೇಕು ; ನಾನು ಮತ್ತೆ ನಗಲು
ಕೆ ಈಶ್ವರ ಕಿರಣ
೧೬.೦೮.೨೦೦೫
‹
›
Home
View web version