ಕೆಲವೊಮ್ಮೆ ಹಾಗೆಯೇ
ಚಡ್ಡಿಯೊಳಗೆ ನಾನೇ ಸಿಲುಕಿದಂತೆ !
ಬೇರೆಯವರು ಕಾಣದಂತೆ
ಸ್ವಲ್ಪವೇ ತೋರುವಂತೆ
ಕುತೂಹಲ ಕಣ್ಣಲ್ಲೇ ಇರುವಂತೆ
ಕಾಯ್ದುಕೊಂಡಿದ್ದೇನೆ !
ಆಗಾಗ ಗೋಡೆ ಹಾರುವಾಗ
ಜಾತ್ರೆಬೀದಿಗಳಲ್ಲಿ ತಿರುಗುವಾಗ
ಆಕಸ್ಮಿಕವಾಗಿ ಚಡ್ಡಿಯ
ಬಿಗುವು ಸಡಿಲಿದಂತೆ !
ಆದರೂ , ಬೀಳದಂತೆ
..ನೋಡಿಕೊಂಡಿದ್ದೇನೆ !
ಸಿಟ್ಟು ಬರುವುದು ನೀವೆಳೆಯುವಾಗ ಸ್ವಾಮಿ !
ಕಾಣದ ಕೈಯ್ಯೇನಲ್ಲ ನಿಮ್ಮದ್ದು !
ಗೊತ್ತು, ನಿಮಗಾಗುವುದಿಲ್ಲವಿದು
ಆದರೂ ಎಳೆಯುತ್ತೀರಿ !
ನಾನೂ ಹಾಗೆಯೇ,
ಯಾಕೆಂದರೆ
ಹಿಡಿದುಕೊಳ್ಳುವುದರಿಂದ
ಎಳೆಯುವುದು ಸುಲಭ !!
8 comments:
ಕಿರಣ... ಕವನ ಚೆನ್ನಾಗಿದೆ.. ಯಾವುದಾದರೂ ಪತ್ರಿಕೆಯಲ್ಲಿ ನಿನ್ನ ಕವನಗಳನ್ನು ಹಾಕುವ ಪ್ರಯತ್ನ ಮಾಡು
ಭಾವನೆಯನ್ನು, ನಿಲುವನ್ನು ಪ್ರತೀಕಗಳ ಮೂಲಕ ಕವನಿಸುವದು ಸರಳವೇನಲ್ಲ. ಈ ಕಾರ್ಯವನ್ನು ನೀವು ಚೆನ್ನಾಗಿ ಸಾಧಿಸಿದ್ದೀರಿ.ಸುಂದರವಾದ ಕವನಕ್ಕೆ ಅಭಿನಂದನೆಗಳು.
ಅಮೂರ್ತವಾಗಿ ಝಾಡಿಸೋ ಕವನ.
ಇದು ರಾಜಕೀಯ ಪಕ್ಷಗಳಿಗೂ ಅನ್ವಯವಾಗುತ್ತೆ ಅಲ್ವೇ ಭಟ್ರೇ!
ಕಿರಣ ಚಡ್ಡಿ ಜಾಗ್ರತೆ ಮಾರಾಯ.....
ಹ ಹ ಹ ಚಡ್ಡಿ ಹಿಸ್ಟರಿ ಚೆನ್ನಾಗಿದೆ ಕಣೋ...
ಬಿಚ್ಚುವದಿಲ್ಲವೆಂದಿದ್ದರು ಅದರ ಸುತ್ತವೆ ನಮ್ಮ ಲಕ್ಷ !
ಒಳಗಿನದನ್ನು ಬಚ್ಚಿಟ್ಟುಕೊಳ್ಳುವ ಹುನ್ನಾರ ತವಕ.
ಅದ್ಭುತ ಪ್ರತಿಮೆಗಳನ್ನು ಬಳಸಿದ್ದಿರಾ...
ಹಹಹ..ಭಟ್ರೇ, ಮಸ್ತಾಗಿದೆ ಎಲ್ಲ ರೀತಿಯಿಂದಲೂ! :-)
'ನಿಲುವು' ಸಕ್ಕತ್ತಾಗಿದೆ ಸರ್ ! :)
ವಾಸ್ತವ ಕಟು ಸತ್ಯವನ್ನು ಕವನದ ಮೂಲಕ ಹೇಳುವುದೂ ಒಂದು ಕಲೆ...! ಚೆನ್ನಾಗಿ ಬರದ್ದೆ....!!
Post a Comment