ಕೊಳಲೂದಿ ಸಖಿಯರನು ಕರೆದನಾ ಗೊಲ್ಲ
ರಾಧೇ ಎನುವ ಕೂಗು ನೀ ಕೇಳಲಿಲ್ಲ
----
ಕೃಷ್ಣಾ ನೀ ಕರೆದಾಗ ನಾ ಬಾರದಿಹೆನೆ ?
ಕೊನೆಯೆ೦ತೊ ಅರಿಯದಿಹ ಈ ಪ್ರೇಮ ಕತೆಗೆ
ನೋವ ಬೆನ್ನುಡಿ ಇಹುದೆ ಪ್ರೀತಿ ಉನ್ನತಿಗೆ ?
ಈಶ್ವರ ಕಿರಣ ಭಟ್
ಆಗಸ್ಟ್ ೨೦೧೦
ರಾಧೇ ನಿನ್ನನು ಉಳಿದು ಬಂದಿರುವರೆಲ್ಲ !
ಯಮುನಾ ನದೀ ತೀರದಲಿ ಓಡಿ ಕರೆದ
ಹುಡುಕಾಡಿ ಬಸವಳಿದನು ವಿರಹದಿಂದ ರಾಧೇ ಎನುವ ಕೂಗು ನೀ ಕೇಳಲಿಲ್ಲ
----
ಕೃಷ್ಣಾ ನೀ ಕರೆದಾಗ ನಾ ಬಾರದಿಹೆನೆ ?
ನೀ ಸಿಗದೇ ಆರುವುದೇ ವಿರಹದಾ ಬೇನೆ ?
ಹೂವನ್ನೇ ತುಂಬಿರುವ ಪ್ರೇಮದುದ್ಯಾನ ನೀನು
ಅಲ್ಲೆಲ್ಲೋ ಸೆರೆಸಿಕ್ಕ ಬಿಡಿಹೂವು ನಾನು ಕೊನೆಯೆ೦ತೊ ಅರಿಯದಿಹ ಈ ಪ್ರೇಮ ಕತೆಗೆ
ನೋವ ಬೆನ್ನುಡಿ ಇಹುದೆ ಪ್ರೀತಿ ಉನ್ನತಿಗೆ ?
ಈಶ್ವರ ಕಿರಣ ಭಟ್
ಆಗಸ್ಟ್ ೨೦೧೦