Saturday, May 7, 2011

ಕವನ !

ಕವನ ಬರಿಯುವ ಹುಡುಗ
ಬರೆದ ಕವನ ... ಬರೆವಾಗ ಇಷ್ಟೇ ಬರೆದ .



ವಿಮರ್ಶಕ ಒಳ್ಳೆಯವ ,
ಬರೆದ ವಿಮರ್ಶೆ
ಕ -ಕಲಿಯುಗದಲ್ಲಿ
ವ - ವನಗಳು , ಪರಿಸರ
ನ - ನಶಿಸಿ ಹೋಗುತ್ತದೆ !!

ಈಶ್ವರ ಕಿರಣ ಭಟ್ 
೨೯. ೦೪ .೨೦೧೧

Sunday, May 1, 2011

ನಲ್ಲೆ ನೋಡು ಇಲ್ಲಿ ಸುರಿವ ಮಂಜಿನ ಮಳೆ..


ನಲ್ಲೆ ನೋಡು ಇಲ್ಲಿ ಸುರಿವ ಮಂಜಿನ ಮಳೆ
ಮೆಲ್ಲನುಲಿದ ನಲ್ಲನ ದನಿ ಕೇಳಿತೆ ಇಳೆ ?

ಹಸಿ ಹಸಿರಿಗೂ ಹಸಿರು ತಂದ ಹಸಿರಿನಾ ಮಳೆ
ಹುಸಿಮುನಿಸಲು ನಗುವರಳಿದ ಪ್ರೇಮವೀ ಮಳೆ
ಬಿಸಿಯುಸಿರಿನ ಭಾವ ತಂದ ಬದುಕಿನಾ ಮಳೆ
ಹೊಸ ಜೀವಕೆ ಜೀವ ತಂದ ಕಾವಿನಾ ಮಳೆ

ಕಸಿದ ಪ್ರೇಮ ಪ್ರಣಯವೆಲ್ಲ ಉಸಿರಿತೆ ಮಳೆ
ಬೆಸೆದ ಬಂಧ ಚಂದಕೆಲ್ಲ ಸಾಕ್ಷಿಯಾ ಮಳೆ
ಹೊಸೆದ ಸೊಗದ ಭಾವಕೆಲ್ಲ ನಾಚಿತೆ ಮಳೆ ?
ಹೊಸದು ಜಗದ ಸೃಜಿಸಿ ಕುಣಿದಳೀ ಮಳೆ !

ನಲ್ಲೆ ನೋಡು ಇಲ್ಲಿ ಸುರಿವ ಮಂಜಿನ ಮಳೆ
ಮೆಲ್ಲನುಲಿದ ನಲ್ಲನ ದನಿ ಕೇಳಿತೆ ಇಳೆ ?