Wednesday, January 12, 2011

ಅಡಕೆಮರಕ್ಕೆ !!!


ಹಸೆ ಹತ್ತಿ, ಕತ್ತೆತ್ತಿ..ಫಲ ಉಡುವ ಸಿರಿಯೆತ್ತಿ


ಹಣ್ಣಾಗಿ ,ಕೊನೆಗೆ ಮಣ್ಣಾಗಿ,
ಬಂಗಾರ ಬಾಳ್ ನಿಂದು , ಸಿಂಗಾರ ತಾಯೇ ..



ಅಗೆದಗೆದು ಉತ್ತೆ ನಾ ಪಡೆಯೆ ನಿನ್ನ ಫಲ,
ಮಣ್ಣೊಲವ ಮರೆತರೂ  ಬಿಡದೆ ನಿನ್ನಯ ಬೆನ್ನು ,
ಗರಿಕೆಯಂತಿದ್ದ ನೀನ್ , ಚಿಮ್ಮಿದಾ ಪರಿ ಏನು ?
ಬರಿ ಬೆಡಗು ನನಗಿನ್ನು; ಕುಬ್ಜ ನಾನು !!



ವರುಷ ಎಷ್ಟಾಯ್ತೆಂದು ಯಾರು ಕೇಳಿದರಿಲ್ಲ ,
ನನಗೋ ದಿನವೆಷ್ಟೆಂದು ಕೇಳುವರು ಎಲ್ಲಾ!
ಅಪರೂಪಕ್ಕೋ ಏನೋ ನಮ್ಮಲ್ಲೂ ಒಬ್ಬ ನಿನ್ನಂತೆ!
ಬಾಹುಬಲಿಯಾದನವ; ನಾವ್ ಮಾತ್ರ ಬೆತ್ತಲೆ !


ನಿನ್ನ ಫಲ ಕೈಯಲ್ಲಿ , ನಾವು ಕತ್ತರಿಯಲ್ಲಿ !
ಉತ್ತರಿಸದಿಹ ಪ್ರಶ್ನೆ ಇನ್ನು ನೂರಾರು !
ನೋಡೋಣ ಮುಂದೆ ; ಈಗ ಬಣ್ಣದ ಲೋಕ 
ಕತ್ತಲಾದಂತೆ ಎಲ್ಲವೂ ಕಪ್ಪೇ !!


ಈಶ್ವರ ಭಟ್ "ಕಿರಣ"
೧೩/೦೧/೨೦೧೧ 

2 comments:

ರವಿ ಮೂರ್ನಾಡು said...

ಭಾವ ಪಕ್ವತೆ ಚೆಂದ ಬಂದಿದೆ ಮಾನ್ಯ ಈಶ್ವರರೆ.ಕಾಣುವ ಸಾಮಾನ್ಯದಲ್ಲಿ ಅಸಾಧಾರಣಾ ಒಳನೋಟ ನಿಮ್ಮದು.ಅದಕ್ಕೆ ಧ್ಯಾನ ಅಗತ್ಯ. ಅದು ಇಲ್ಲಿ ನಾನು ಕಾಣುತ್ತೇನೆ. ಅಭಿನಂದನೆಗಳು.

Ashoka Bhagamandala said...

nimma kavyada adake mara baanu muttuvashtettarake beleyali :):)
Tumbaa chennagide Kiran.