Tuesday, July 26, 2011

ನಿರೀಕ್ಷೆ ..


ನೀರಾಟಕಿಳಿದೆ ನಾ ನೀರೆಯರಾ ಸೊಬಗಿನ
ದಾರಿ ನೀ ತೋರಿದೆಯ ಮಾರ್ಮಲೆವ ಮಡುವಿನೊಳು
ಹೆಸರಾಟ ಬರಿ ಕೆಸರ ಪಾಚಿಗಟ್ಟಿದ ಬಣ್ಣ
ಉಸಿರ ಬದುಕಿಸೊ ಆಟ ಅವಳಿಗೋ ಅವನಿಗೋ
ಮಸಳುವುದು ಒಳಹೊರಗೆ ನಿತ್ಯ ನೂತನ ಎಂಬ ಹಳೆಯ ಸರಕು !

ಆ ನೀರು ನೀಲಿಯದಂತೆ, ಬಾನು ನೀಲಿಯದಂತೆ
ಅಣಕಿಸುವ ಕಣ್ಣಾಲಿ ! ಎಲ್ಲ ಕಪ್ಪಿನ ಮೇಲ್ಮೆ
ಒಳಗೆ ಎದೆ ಬೆಳ್ಳಿಯದು , ಕಟ್ಟು ಚಿನ್ನದ್ದಂತೆ
ತೊಳೆದು ಹೋಗುವುದಿಲ್ಲ, ತಳೆದರದು ಕರಗದು
ಸುಳಿವು ಮರಣದ ಕಪ್ಪು, ಜನನ ಬಿಳುಪೇ ?

೧೧.೦೭.೨೦೧೧



1 comment:

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಭಾವನೆಗಳ ಆಲೋಚನೆಯಲ್ಲಿ ಕಟ್ಟಿಹಾಕುವ ಗಟ್ಟಿತನ.. :)
ಅರ್ಥಕ್ಕೆ ಹತ್ತಿರ ಬಂದು ದೂರ ಸರಿಯುವ ಕಲ್ಪನೆಯ ಮಾಯಾಜಾಲ ನಿಮ್ಮ ಪದ ಪ್ರಯೋಗಗಳಲ್ಲಿ .. ಏನೆಂದು ಉತ್ತರಿಸಬೇಕು ಓದಿದಾಗ ಅನ್ನುವ ಗೊಂದಲ .. ಈ ಕವಿತೆಯ ಮಾಯೆಯೂ ಹಾಗೆಯೇ.. ಜೀವನವನ್ನು ದಿಕ್ಕುಗಳ ಬದಲಿಸಿ ನೋಡಿದಾಗ ಸಿಗುವ ಪ್ರಶ್ನೆಯಂತೆ .. ಮತ್ತು ಕೊನೆಯಲ್ಲಿ ಕೊಟ್ಟ ಪ್ರಶ್ನೆಯ ಕಲ್ಪನೆಯೇ ತಿಳಿಯುತ್ತಿಲ್ಲ.. ಆದರೂ ರಚನೆಯಲ್ಲಿ ವಿಶಿಷ್ಟ ಸೊಗಸು.. ಹಲವು ಭಾವನೆಯ ದೃಷ್ಟಿಕೋನದಲ್ಲಿ ಚಿಂತಿಸಿ ಓದುವಂತೆ ಮಾಡುತ್ತದೆ.. ಮೆಚ್ಚಿದೆವು ನಿಮ್ಮ ಲೇಖನಿಯ ಜಾದೂವನ್ನು.. :)