Saturday, September 10, 2011

"ಚೋಳ ಕಡಿತ"

ಹೀರಿ ಸಸ್ಯದ ಕಾಂಡ, ಕಚ್ಚಿ ಮಾಂಸದ ಖಂಡ
ತುಂಬಿದಾ ಉದರ ಭಾರಕೆ ಹೆದರಿ,
ಜಗದ ಚಾದರದೊಳಗೆ
ಮೌನ ನಿದ್ದೆಯ ಬಯಸಿ ಮೆಲ್ಲ ಜಾರಿದರೆ - ಕಡಿದಿತ್ತು ಚೇಳು

ಬೆಂಕಿ ಆರಿಸೊ ನೆಪದಿ ನೀರಿನಾ ಸೆರಗಿಂದ
ಶಂಕೆಯೋ ಅಂಕೆಯೋ ಇಲ್ಲದೆಯೆ,
ಬಿಂಕದಾ ಬೆಂಕಿಯನು
ಮೈಮೇಲೆ ಎಳೆದೆಳೆವ ಹುರುಪಿತ್ತು - ಮತ್ತೆ ಕಡಿದಿತ್ತು ಚೇಳು

ಮೆಚ್ಚಿತ್ತು, ಬೆಚ್ಚಿತ್ತು , ಸಿಕ್ಕಿತ್ತು ಕಾಳು
ಮತ್ತೆ ತಂಪಾಗೆಂದು ತುಟಿ ಬಯಸಿತ್ತು ಹಾಲು
ಕಾಮಹೋಮದ ಬೆಂಕಿ ಕಟ್ಟಿತ್ತು ಸಾಲು
ಎಲ್ಲ ಸೋಲಿಸಿ, ಗೆದ್ದಿತ್ತು ಸಂಸ್ಕಾರ ಚೇಳು !!

೧೭-೦೮-೨೦೧೧

4 comments:

Dr.D.T.Krishna Murthy. said...

ಚಂದದ ಕವನ ಈಶ್ವರ್.ಅಭಿನಂದನೆಗಳು.

Badarinath Palavalli said...

ಪ್ರತಿ ಓದಿಗೂ ಹಲವು ಅರ್ಥಗಳನ್ನು ಹೊಮ್ಮಸಿದ ಕವನ.

ಗಿರೀಶ್.ಎಸ್ said...

nice one Ishwar !!!

KalavathiMadhusudan said...

bahala aasaktiyinda odisikolluttave sir nimma kavanagalu.abhinandanegalu.