ಹೀರಿ ಸಸ್ಯದ ಕಾಂಡ, ಕಚ್ಚಿ ಮಾಂಸದ ಖಂಡ
ತುಂಬಿದಾ ಉದರ ಭಾರಕೆ ಹೆದರಿ,
ಜಗದ ಚಾದರದೊಳಗೆ
ಮೌನ ನಿದ್ದೆಯ ಬಯಸಿ ಮೆಲ್ಲ ಜಾರಿದರೆ - ಕಡಿದಿತ್ತು ಚೇಳು
ಬೆಂಕಿ ಆರಿಸೊ ನೆಪದಿ ನೀರಿನಾ ಸೆರಗಿಂದ
ಶಂಕೆಯೋ ಅಂಕೆಯೋ ಇಲ್ಲದೆಯೆ,
ಬಿಂಕದಾ ಬೆಂಕಿಯನು
ಮೈಮೇಲೆ ಎಳೆದೆಳೆವ ಹುರುಪಿತ್ತು - ಮತ್ತೆ ಕಡಿದಿತ್ತು ಚೇಳು
ಮೆಚ್ಚಿತ್ತು, ಬೆಚ್ಚಿತ್ತು , ಸಿಕ್ಕಿತ್ತು ಕಾಳು
ಮತ್ತೆ ತಂಪಾಗೆಂದು ತುಟಿ ಬಯಸಿತ್ತು ಹಾಲು
ಕಾಮಹೋಮದ ಬೆಂಕಿ ಕಟ್ಟಿತ್ತು ಸಾಲು
ಎಲ್ಲ ಸೋಲಿಸಿ, ಗೆದ್ದಿತ್ತು ಸಂಸ್ಕಾರ ಚೇಳು !!
೧೭-೦೮-೨೦೧೧
ತುಂಬಿದಾ ಉದರ ಭಾರಕೆ ಹೆದರಿ,
ಜಗದ ಚಾದರದೊಳಗೆ
ಮೌನ ನಿದ್ದೆಯ ಬಯಸಿ ಮೆಲ್ಲ ಜಾರಿದರೆ - ಕಡಿದಿತ್ತು ಚೇಳು
ಬೆಂಕಿ ಆರಿಸೊ ನೆಪದಿ ನೀರಿನಾ ಸೆರಗಿಂದ
ಶಂಕೆಯೋ ಅಂಕೆಯೋ ಇಲ್ಲದೆಯೆ,
ಬಿಂಕದಾ ಬೆಂಕಿಯನು
ಮೈಮೇಲೆ ಎಳೆದೆಳೆವ ಹುರುಪಿತ್ತು - ಮತ್ತೆ ಕಡಿದಿತ್ತು ಚೇಳು
ಮೆಚ್ಚಿತ್ತು, ಬೆಚ್ಚಿತ್ತು , ಸಿಕ್ಕಿತ್ತು ಕಾಳು
ಮತ್ತೆ ತಂಪಾಗೆಂದು ತುಟಿ ಬಯಸಿತ್ತು ಹಾಲು
ಕಾಮಹೋಮದ ಬೆಂಕಿ ಕಟ್ಟಿತ್ತು ಸಾಲು
ಎಲ್ಲ ಸೋಲಿಸಿ, ಗೆದ್ದಿತ್ತು ಸಂಸ್ಕಾರ ಚೇಳು !!
೧೭-೦೮-೨೦೧೧
4 comments:
ಚಂದದ ಕವನ ಈಶ್ವರ್.ಅಭಿನಂದನೆಗಳು.
ಪ್ರತಿ ಓದಿಗೂ ಹಲವು ಅರ್ಥಗಳನ್ನು ಹೊಮ್ಮಸಿದ ಕವನ.
nice one Ishwar !!!
bahala aasaktiyinda odisikolluttave sir nimma kavanagalu.abhinandanegalu.
Post a Comment