ಸವಾಲು ಇಲ್ಲದ ಜೀವನ
ಟವೆಲ್ಲು ಇಲ್ಲದ ಸ್ನಾನ - ಎರಡೂ ಒಂದೇ ರೀತಿ ಅಲ್ವಾ?
ಸವಾಲು ಬರಿಸೋದು ಕಣ್ಣೀರು
ಟವೆಲು ಒರೆಸೋದು ತಣ್ಣೀರು
ರಾಮನಿಗೆ ವನವಾಸ ಎಂದರಿತ ಸೀತೆ ಹೋದಳವನ ಜೊತೆ ಕಾಡಿಗೆ
ಇವಳು ತವರು ಮನೆ ಸೇರಿದ್ದಾಳೆ , ಅವ ತರಲಿಲ್ಲ ಸೆಂಟು ಪೌಡರು ಮತ್ತೆ ಕಾಡಿಗೆ !!
ರಾಮ ನಾನಾಗಲಿಲ್ಲ, ಏಕೆಂದರೆ
ಕಾಡಿಂದ ಬರುವ ಮೊದಲೇ ಸೀತೆ
ನಾನು ಇನ್ನೊಬ್ಬಳಿಗೆ ಸೋತೆ !
ಪ್ರಿಯೆ , ಕೊಡುವೆಯಾ ಒಂದು ಮುತ್ತು
ಉಹುಂ.. ಎಷ್ಟಿದೆ ನಿನ್ನ ಬಳಿ ಸೊತ್ತು?
ಸೊತ್ತಿಲ್ಲ ನನ್ನಲ್ಲಿ, ತೋರು ನಿನ್ನಯ ಕತ್ತು
ತಾಳಿ ಕಟ್ಟುವುದಷ್ಟೆ ನನ್ನ ತಾಕತ್ತು !!
ಗೆಳತಿ ,
ಹೃದಯದ ನೋವು ದೊಡ್ಡದಾಗಿತ್ತು ನೀನು ಬಿಟ್ಟಾಗ
ಅದಕಿಂತ ನೋವಿದೆ,ಗೊತ್ತಾಗದೇ ಕಾಲುಗುರು ಕಿತ್ತಾಗ !!
ಹಿಂದೆ ಎಷ್ಟು ಸಲ ಅತ್ತಿದ್ದೆ ನಿನಗಾಗಿ ನೊಂದು
ಈಗಲೂ ಅಳುತಿರುವೆ ಈರುಳ್ಳಿ ಕೊರೆದು !!
ಬಂದ ಭಾವಕ್ಕೆ ಬಂಧನವಿಲ್ಲ, ಬಿಡುಗಡೆ !
ಎ೦ದವನು ಒಬ್ಬನ ಕೊ೦ದ
ಇ೦ದವನ ಬಿಡುಗಡೆ !!
2 comments:
ಈಶ್ವರ್ ನಿಮ್ಮ ಧಾಟಿ ಚನ್ನಾಗಿದೆ, ಕವನವಾಗದ ಸಾಲುಗಳು ಹೇಗಾಯ್ತು ಕವನವಾಗದ ಸಾಲುಗಳು...??
ಥಾಂಕ್ಸ್ ಜಲನಯನ ಅವ್ರೆ.. ಹೀಗೆ ಕೆಲವು ಸಲ ದೊಡ್ಡ ಕವನ ಆಗಬೇಕಾದ ಸಬ್ಜೆಕ್ಟು ಸಣ್ಣಗೆ ಅದೇ ಅರ್ಥದಲ್ಲಿ ಬರೀ ಸಾಲುಗಳಾಗುತ್ತದೆ.. ಅದನ್ನೆ ಹೇಳಿದ್ದು.. ಬರುತ್ತಾ ಇರಿ.
Post a Comment